Social Science: From the Forum

From Karnataka Open Educational Resources
Jump to navigation Jump to search

ಶ್ರೀ ಸಿ.ಎಸ್.ತಾಳಿಕೋಟಿಮಠ (C S T)

ಸ್ವಾತ೦ತ್ರ್ಯೋತ್ಸವ ದ ಮೇಲೆ ಒಂದು ಕವಿತೆ


ತ೦ದಿತು ದೇಶಕ್ಕೆ ಅ೦ದೇ  ಸ್ವಾತ೦ತ್ರ್ಯ   !

ಪ್ರಜೆಗಳಿಗೆ ಇನ್ನು ತಪಿಲ್ಲ ಅತ೦ತ್ರ.

ತು೦ಬಿರಲು ಹೀಗೆ ರಾಜಕಾರಿಣಿಗಳಲ್ಲಿ ಕುತ೦ತ್ರ್ಯ...

ಆದ್ದರಿ೦ದ ಇನ್ನೂ ಬಿಟ್ಟಿಲ್ಲ ನಮಗೆ ಪರತ೦ತ್ರ್ಯ...


ದೇಶದ ತು೦ಬೆಲ್ಲಾ ಬ್ರಷ್ಟಾಚಾರದ ಕಬ೦ಧ ಬಾಹು

ಇದು ನಮ್ಮೆಲ್ಲರ ದುರಾಶೆಯ ಕುರುಹು

ತೊಲಗಬೇಕು ಗೋಮುಖ ವ್ಯಾಘ್ರರ ಸೋಗು

ಬೆಳೆಯಲಿ ನಮ್ಮಲ್ಲಿ ಮಾನವಿಯ ಮೆರಗು.


ದೇಶದಲ್ಲಿ ರಾಜಕೀಯ ಬಡಿದಾಟ

ಅಧಿಕಾರ,ಗದ್ದುಗಿಗಾಗಿ ಭಾರಿ ಬಡಿದಾಟ, ಬರೀ ಕಿತ್ತಾಟ.

ಒ೦ದಡೆ ಬದುಕಿಗಾಗಿ ಬಡಜನರ ಕಿರುಚಾಟ

ಪ್ರಜೆಗಳ ಬದುಕಿನೊಡನೆ ಚದುರ೦ಗದಾಟ                                                                                                                                                                                         

   -  ಶ್ರೀ ಸಿ.ಎಸ್.ತಾಳಿಕೋಟಿಮಠ. ಜಿಲ್ಲಾ ಸ೦ಪನ್ಮೂಲ ವ್ಯಕ್ತಿ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ

ಶಿಕ್ಷಕರ ದಿನಾಚರಣೆಯಂದು ಒಂದು ಅವಲೋಕನ

ಪರಿಚಯದ ಹಿರಿಯರೊಬ್ಬರು ಹತ್ತು ವರ್ಷದ ತನ್ನ ಮೊಮ್ಮಗನಿಗೆ ಪರೀಕ್ಷಿಸಲೋಸುಗ 'ಶಿಕ್ಷಕರ ದಿನಾಚರಣೆ ಎಂದು?' ಎಂದು ಕೇಳಿದರು. ಸೆಪ್ಟೆಂಬರ್ 15 ಅಂದ! ಬೇಸ್ತು ಬಿದ್ದ ಹಿರಿಯರು "ಕನಿಷ್ಠ ಸೆಪ್ಟೆಂಬರ್ ತಿಂಗಳಾದರೂ ಸರಿಯಾಗಿ ಹೇಳಿದ್ದಾನಲ್ಲ ಎಂದು ಸಮಾಧಾನಪಟ್ಟುಕೊಂಡೆ, ಆದರೆ ಈ ದಿನಾಚರಣೆಯ ಅರಿವಿಲ್ಲದಿದ್ದಕ್ಕೆ ಬೇಜಾರುಪಟ್ಟುಕೊಂಡೆ" ಎಂದು ತುಸು ಅಸಮಾಧಾನದಿಂದಲೇ ಹೇಳಿದರು.

ನಿಜ. ನಾಗಾಲೋಟದಲ್ಲಿ ಸಾಗುತ್ತಿರುವ ಇಂದಿನ ಲೋಕದಲ್ಲಿ ಮಕ್ಕಳಿಗೆ ಈ ದಿನಾಚರಣೆಯ ಮಹತ್ವದ ಅರಿವೇ ಇರುವುದಿಲ್ಲ. ಒಂದು, ಎರಡು ದಶಕಗಳ ಹಿಂದೆ ಇದ್ದ ಶಿಕ್ಷಕ-ವಿದ್ಯಾರ್ಥಿಯ ನಡುವಿನ ಆತ್ಮೀಯತೆ, ಬಾಂಧವ್ಯ, ಪ್ರೀತಿ ಇಂದು ಮಾಯವಾಗುತ್ತಿದೆಯಾ? ಎಂಬ ಪ್ರಶ್ನೆ ಕಾಡದೇ ಇರದು. ಇದಕ್ಕೆ ಕಾರಣಗಳೂ ಹಲವಾರಿರಬಹುದು.

ಕಚ್ಚೆ ಪಂಚೆ ಧರಿಸಿ, ತಲೆಮೇಲೆ ಟೋಪಿ ಧರಿಸಿ, ಕೈಯಲ್ಲಿ ಬೆತ್ತ ಹಿಡಿದ ಪ್ರೀತಿಯ ಮೇಷ್ಟ್ರು ಇಂದು ಕಾಣಸಿಗಲಿಕ್ಕಿಲ್ಲ. ಇಂದಿನ ಶಿಕ್ಷಣ, ಶಿಕ್ಷಕನ ಚೆಹರೆಯೇ ಬದಲಾಗಿದೆ. ನಗರಗಳಲ್ಲಿ ಲಕ್ಷಗಟ್ಟಲೆ ಫೀಸು ಕೊಡುವ ಶಾಲೆಯಲ್ಲಿ ಇಂದು ವಿದ್ಯಾರ್ಥಿಯನ್ನು ದಾರಿತಪ್ಪಿದಾಗ ಥಳಿಸುವುದಿರಲಿ ಮೈ ಮುಟ್ಟಲೂ ಸಾಧ್ಯವಿಲ್ಲ. ನಾವು ಎಷ್ಟು ಮುಂದುವರಿದಿದ್ದೇವೆಂದರೆ, ಶಾಲೆಯಲ್ಲಿ ಮಗು ಏನು ಮಾಡುತ್ತಿದೆಯೆಂದು ಪಾಲಕರು ಇಂಟರ್ನೆಟ್ ಮುಖಾಂತರ ಮನೆಯಲ್ಲಿ ಕುಳಿತೇ ಎಲ್ಲ ವಿವರ ತಿಳಿಯಬಹುದಾಗಿದೆ. ಮಕ್ಕಳಿಗೂ ಕಡಿಮೆಯಿಲ್ಲದ ತಲೆಕೆಲಸ, ಶಿಕ್ಷಕರಿಗೂ ಬಿಡುವಿಲ್ಲದ ದುಡಿಮೆ. ಹೀಗಿರುವಾಗ ಮಕ್ಕಳು-ಶಿಕ್ಷಕರ ಬಾಂಧವ್ಯಕ್ಕಾದರೂ ಜಾಗ ಅಥವಾ ಸಮಯವೆಲ್ಲಿದೆ? ಆದರೂ ವಿದ್ಯಾರ್ಥಿಗಳು ಅಕ್ಷರ ಕಲಿಸುವ ಶಿಕ್ಷಕರನ್ನು ನೆನೆಯುವುದು, ಮಕ್ಕಳಿಗೆ ಗುರುವಂದನೆ ಕುರಿತು ತಿಳಿವಳಿಕೆ ನೀಡುವುದು ಪಾಲಕರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ನಮ್ಮ ಜೀವನದಲ್ಲಿ ಬಂದ ಆತ್ಮೀಯ ಮೇಷ್ಟ್ರು, ಆದರ್ಶ ಶಿಕ್ಷಕನನ್ನು ನೆನೆದು ಮಕ್ಕಳಲ್ಲಿ ಹೆಚ್ಚಿನ ಸ್ಫೂರ್ತಿ ತುಂಬುವುದು ಇಂದಿನ ಅಗತ್ಯ.