ಪ್ರವೇಶದ್ವಾರ:ವಿಜ್ಞಾನ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೦೫, ೩೧ ಮೇ ೨೦೧೩ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: <!-- This portal was created using subst:box portal skeleton --> <!-- BANNER ACROSS TOP OF PAGE --> {| id="mp-topbanner" style="width:100%;font-size:100%;backg...)
Jump to navigation Jump to search

ವಿಜ್ಞಾನದ ಇತಿಹಾಸ
ವಿಜ್ಞಾನದ ತತ್ವಶಾಸ್ತ್ರ
ವಿಜ್ಞಾನದ ಅಧ್ಯಾಪನ

ಪರಿವಿಡಿ
ಪಠ್ಯಕ್ರಮ

ಪಠ್ಯ ಪುಸ್ತಕಗಳು
ಪ್ರಶ್ನೆ ಪತ್ರಿಕೆಗಳು

ಪಾಠ ಯೋಜನೆಗಳು
ವಿದ್ಯಾರ್ಥಿಗಳಿಗೆ ಮಾಹಿತಿ



ವಿಜ್ಞಾನ

ವಿಜ್ಞಾನವು, ನಾವು ಇಂದು ಜ್ಞಾನದ ಒಂದು ಭಾಗವಾಗಿ ಪರಿಗಣಿಸುವ ಶಾಸ್ತ್ರದ ಆಕಾರದಲ್ಲಿ ತುಂಬ ಹೊಸದು, ಕೇವಲ ಕೆಲವು ನೂರು ವರ್ಷ ಹಳೆಯದು. ನಮಗೆ ತಿಳಿದಿರುವ ವಿಜ್ಞಾನವು ನಮ್ಮ ದೈನಂದಿನ ಜೀವನದ ಸಂಗತಿಗಳು ಮತ್ತು ವಿವರಣೆಗಳಿಗೆ ಸಂಬಂಧಿಸಿದೆ. ಯಾವ ವಿಧದಲ್ಲಿ ವಿಜ್ಞಾನ ಒಂದು ಪ್ರಕ್ರಿಯೆ ಆಗಿದೆ ಮತ್ತು ಹೇಗೆ ಅದು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಬೇಕಾದ ಒಂದು ಅಧ್ಯಯನದ ವಿಷಯವಾಗಿದೆ ಎಂದು ಪರಿಶೀಲಿಸುವ ಅಗತ್ಯವಿದೆ. ವಿಜ್ಞಾನವು ವಿಭಿನ್ನವಾದ ಒಂದು ಸಾಹಸಯಾತ್ರೆಯಾಗಲು ಕಾರಣವಾದ ವ್ಯಾಸಂಗ ಮತ್ತು ಅಭ್ಯಾಸದ ಆ ಅಂಶಗಳು ಯಾವುವು? ವಿಜ್ಞಾನದ ಅಭ್ಯಾಸದ ಮೇಲೆ ಪ್ರಭಾವ ಬೀರುವ ಸಾಮಾಜಿಕ ಕ್ರಿಯಾ-ಶಾಸ್ತ್ರಗಳು ಯಾವುವು? ವಿಜ್ಞಾನದ ಮಿತಿಗಳೇನು? ಈ ಪ್ರಶ್ನೆಗಳನ್ನು ಒಬ್ಬ ವಿಜ್ಞಾನದ ವಿದ್ಯಾರ್ಥಿಯು ಪರಿಗಣಿಸಬೇಕಾಗುತ್ತದೆ. ಹಲವು ಬಾರಿ ವಿಜ್ಞಾನವೆಂದರೆ ವಿಜ್ಞಾನವನ್ನು ಒಂದು ವಿಷಯವನ್ನಾಗಿ ಕಲಿಯುವುದೆಂದು ತಿಳಿಯಲಾಗುತ್ತದೆ ಹಾಗೂ ಇದು ವಿಜ್ಞಾನದ ಕಲಿಕೆ, ಬೋಧನೆ ಹಾಗೂ ವೈಜ್ಞಾನಿಕ ಚಿಂತನೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿಜ್ಞಾನವನ್ನು ರೂಢಿಗತಗೊಳಿಸಲು ವಿದ್ಯಾರ್ಥಿಯನ್ನು ತಯಾರಿಸಲು ಅಳವಡಿಸಬೇಕಾದ ಶಿಕ್ಷಣಶಾಸ್ತ್ರವನ್ನು ಒಳಗೊಂಡಿರುತ್ತದೆ. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಎರಡು ಕ್ಷೇತ್ರಗಳಲ್ಲಿ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು ಇದು ಒಂದು ಪ್ರವೇಶದ್ವಾರವಾಗಿದೆ.

ಕುತುಹಲಕಾರಿ ಸುದ್ದಿ

ನಿಮಗಿದು ಗೊತ್ತೆ?

ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ ಇನ್ನೊಬ್ಬ ನೋಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ರ ಚಿಕ್ಕಪ್ಪ! ರಾಮನ್ ಪರಿಣಾಮ ಮತ್ತು ಚಂದ್ರಶೇಖರ್ ಮಿತಿಗಳ ಬಗ್ಗೆ ತಿಳಿಯಿರಿ.

ಸರ್ ಸಿ.ವಿ. ರಾಮನ್

ಜಗತ್ತನ್ನೇ ಬದಲಾಯಿಸಿದ ಆವಿಷ್ಕಾರಗಳು
ನಮ್ಮ ಬದುಕನ್ನು ಬದಲಾಯಿಸಿದ ಹತ್ತು ಪ್ರಮು ಆವಿಷ್ಕಾರಗಳು .

ಹೆಚ್ಚಿನ ಸುದ್ದಿಗಳು
ನಿಮಗಿದು ಗೊತ್ತೆ?

ಪ್ರಸಿದ್ಧ ವೈಜ್ಞಾನಿಕರು

ಘಟನೆಗಳು

ಜುಲೈ 2013

ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ

ರಾಯಚೂರು : ಇನ್‌ಸ್ವೈಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನವನ್ನು ದಿನಾಂಕ :27ನೇ & 28ನೇ ಜುಲೈ 2013ರಂದು ಯರಮರಸ್‌ನ ಆನಂದ ಪ್ರೌಢಶಾಲೆ ಮತ್ತು ಡಯಟ್‌ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ : 29ನೇ ಜುಲೈ ನಿಂದ 1ನೇ ಆಗಸ್ಟ್ ವರೆಗೆ ಪ್ರಾಥಮಿಕ ಹಂತದ ಇನ್ ಸ್ಪೈಯರ್ ಅವಾರ್ಡ್ ಸ್ಪರ್ಧೆ ಜರುಗಲಿದೆ.

ಪ್ರದರ್ಶನವನ್ನು ಬೆಂಗಳೂರು ಗ್ರಾಮಾಂತರ ,ಮಂಡ್ಯ , ಉತ್ತರ ಕನ್ನಡದಲ್ಲಿ ಹಮ್ಮಿಕೊಳ್ಳಲಾಯಿತು.ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.

೯ನೇ ತರಗತಿ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ: ೯ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದ ವಿಷಯ ವಿಶ್ಲೇಷಣೆ . ಇದು ೨೦ ಜುಲೈ,೨೦೧೩ ರಂದು ಬಾಗಲಕೋಟೆಯಲ್ಲಿ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಯಾಗಿ ಸಂಜೀವ್ ಕುಮಾರ ಇಸರಡ್ಡಿ ಅವರು ನಿರ್ವಹಿಸಲಿದ್ದಾರೆ.

ಆಗಸ್ಟ್ 2013

ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ ಬಾರಿಗೆ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ದಿನಾಂಕ :31-08-2013ರಂದು 'ವಿಜ್ಞಾನ' ಹಾಗೂ 'ಗಣಿತ' ವಿಷಯಗಳಲ್ಲಿ ಒಲಿಂಪಿಯಾಡ್ ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಆಯೋಜಿಸಿದೆ.

ಸೆಪ್ಟಂಬರ್ 2013

ಜೀವಶಾಸ್ತ್ರ ಒಲಿಂಪಿಯಾಡ್ ಅನಾವರಣ ಶಿಬಿರ: ಇದೊಂದು ಜೀವಶಾಸ್ತ್ರ ಪ್ರಯೋಗಗಳ ಅನಾವರಣ ಶಿಬಿರ ಮತ್ತು ಜೀವಶಾಸ್ತ್ರದ ಒಲಿಂಪಿಯಾಡ್ ಸಿದ್ಧಾಂತವಾಗಿದೆ ಹಾಗೂ ಇದು ಹೋಮಿ ಬಾಬಾ ವಿಜ್ಞಾನ ವಿದ್ಯಾ ಕೇಂದ್ರದಲ್ಲಿ ೪ ರಿಂದ ೬,೨೦೧೩ ರ ವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.

MIT eDX ಇಂದ ಶಾಸ್ತ್ರೀಯ ಯಂತ್ರ(ಕ್ಲಾಸಿಕಲ್ ಮೆಕ್ಯಾನಿಕ್ಸ್) ಮೇಲೆ ಆನ್ ಲೈನ್ ಕೋರ್ಸ್ : ದಂಥಕಥೆಯಾದ ಪ್ರಾಧ್ಯಾಪಕ ವಾಲ್ಟರ್ ಲೆವಿನ್ ಅವರು eDX ಮೇಲೆ ಈ ಕೋರ್ಸನ್ನು ಪ್ರಸ್ತಾಪಿಸುವರು.ಇವರು ಭೌತಶಾಸ್ತ್ರವನ್ನು ತಮ್ಮ ನಿದರ್ಶನಗಳಿಂದ ಜೀವಂತಗೊಳಿಸುವರು ಮತ್ತು ಕಲಿಯುವವರನ್ನು ಭೌತಶಾಸ್ತ್ರದ ಸುಂದರತೆಯನ್ನು ಮೆಚ್ಚುವಂತೆ ಮಾಡುತ್ತಾರೆ. ಆನ್ ಲೈನ್ ಕೋರ್ಸ್ ಸೆಪ್ಟಂ ಬರ್ ೯,೨೦೧೩ ರಿಂದ ಪ್ರಾರಂಭವಾಗುವುದು. ಹೆಚ್ಚಿನ ವಿವರಗಳು ಇಲ್ಲಿ ದೊರಕುವುದು.

ಸೆಪ್ಟೆಂಬರ್ -5 : 'ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಮರೆಯಲಾಗದ ದಿನ' "ಶಿಕ್ಷಕರ ದಿನಾಚರಣೆ" ನಾಡಿನ ಸಮಸ್ತ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಷಯಗಳು


ಡಿಸೆಂಬರ್ 2013

ಅಂತರಾಷ್ಟ್ರೀಯ ಕಿರಿಯ ವಿಜ್ಞಾನ ಒಲಿಂಪಿಯಾಡ್ ೧೫ ವರ್ಷದ ಒಳಗಿನ ಮಕ್ಕಳಿಗಾಗಿ JISO ವಾರ್ಷಿಕ ಸ್ಪರ್ಧೆಯಾಗಿದೆ. ಪ್ರತಿವರ್ಷವು ಇದನ್ನು ಭಾಗವಹಿಸುವ ಒಂದು ದೇಶದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುವುದು ಹಾಗೂ ಈ ಬಾರಿ ಪುಣೆಯಲ್ಲಿ ಡಿಸೆಂಬರ್ ನಲ್ಲಿ ನಡೆಸಲಾಗುವುದು.ಹೆಚ್ಚಿನ ವಿವರಗಳಿಗಾಗಿ ಇಲ್ಲಿಕ್ಲಿಕ್ಕಿಸಿ

ಡಿಸೆಂಬರ್-೨ ರಾಯಚೂರು ಜಿಲ್ಲೆ

ದಿನಾಂಕ ೨-೧೨-೨೦೧೩ ರಿಂದ ೬-೧೨-೨೦೧೩ ರವರೆಗೆ ಡಯಟ್ ಯರಮರಸ್ ನಲ್ಲಿ ನಡೆಯುತ್ತಿರುವ ೨೦೧೩ - ೧೪ ನೇ ಶೈಕ್ಷಣಿಕ ಸಾಲಿನ ೫ ದಿನದ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಪ್ರಾರಂಭದ ದಿನವಾದ ೨-೧೨-೨೦೧೩ ರಂದು ಡಯಟ್ ನ ಪ್ರಾಂಶುಪಾಲರಾದ ಶ್ರೀ ಕೆಂಚನ ಗೌಡ ಅವರ ಅಧ್ಯಕ್ಷತೆಯಲ್ಲಿ ಉದ್ಘಾನೆಯಾಗಿ KOER ನ ಆಶಯಗಳನ್ನು ಪೂರೈಸಲು ರಾಯಚೂರಿನ ವಿವಿಧ ತಾಲೂಕಿನ ಎಲ್ಲಾ ಶಿಕ್ಷಕರು ಸಭೆ ಸೇರಿದ್ದಾರೆ.

ವರ್ಗಗಳು

ವಿಷಯಗಳು

ವಿಷಯವಾರು ವಾರ್ಷಿಕ ಪಾಠ ಮತ್ತು ಕಾರ್ಯಹಂಚಿಕೆ ಪಟ್ಟಿ

  1. ಗೋಪಲ್ ರಾವ್ ಸರ್, ರವರು (ಕೋಲಾರ ಜಿಲ್ಲೆ )ಹಂಚಿಕೊಂಡಿರುವ ಕಾರ್ಯಹಂಚಿಕೆ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ
  2. ಅನಿಲ್ ಕುಮಾರ್ ಸರ್, ರವರು (ರೈಚುರು ಜಿಲ್ಲೆ )ಹಂಚಿಕೊಂಡಿರುವ ಕಾರ್ಯಹಂಚಿಕೆ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ
100px-Simulation1.png

ಮನೋವೃತ್ತಿ ನಕ್ಷೆ ,ಚಟುವಟಿಕಗಳು,ದೃಶ್ಯ ಮಾಧ್ಯಮಗಳು ಮತ್ತು ಬಹುಮಾಧ್ಯಮಗಳು ೯ನೇ ತರಗತಿಯ ವಿಜ್ಞಾನ ಪಾಠಗಳ ಸಂಪನ್ಮೂಲಗಳಿಗಾಗಿ ಇಲ್ಲಿ ಒತ್ತಿ.ಭಾವನಾತ್ಮಕ ತಿಳುವಳಿಯನ್ನು ನಿರ್ಮಿಸಲು ಈ ಸಂಪನ್ಮೂಲಗಳನ್ನು ರಚಿಸಲಾಗಿದೆ ಹಾಗು ಪಠ್ಯಪುಸ್ತಕದ ಅನುಸಾರವಾಗಿ ಹೊಂದಿಸಲಾಗಿದೆ.

  1. ಆಹಾರ
  2. ಜೀವ_ವಿಕಾಸ
  3. ಜೀವನ_ಕ್ರಿಯೆಗಳು

[ಮತ್ತಷ್ಟು]

ವೇದಿಕೆಯಿಂದ

ಮೋಜು ತಾಣ

ಕೇಂದ್ರ ಬಿಂದು

ಕುತೂಹಲಕಾರಿ ಜಾಲತಾಣಗಳು ,ದೃಶ್ಯ ಮುದ್ರಣಗಳು ಮತ್ತು ಪಾತ್ರಾಭಿನಯಗಳು

ಬ್ರಹ್ಮಾಂಡದ ಮಾದರಿ

ಬ್ರಹ್ಮಾಂಡದಲ್ಲಿ ಸೂರ್ಯಕೇಂ‌ದ್ರಿತ ಮತ್ತು ಭೂಕೇಂದ್ರಿತ ಮಾದರಿಯ ಒಂದು ಉತ್ತಮ ಪಾತ್ರಾಭಿನಯ. ಪಾತ್ರಾಭಿನಯವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.